ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ಎಂದಿದೆ ಆಯುಷ್ ಮಂತ್ರಾಲಯ

ಕೊರೊನಾ ವೈರಸ್ ತನ್ನ ಕರಾಳತೆಯನ್ನು ತೋರಿಸುತ್ತಿರುವ ಈ ಸಮಯದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಮಂತ್ರಾಲಯವು ಪುರಾತನ ವೈಧ್ಯಕೀಯ ಶಾಸ್ತ್ರದ ಕೆಲವು ಸಲಹೆಗಳನ್ನು ನಮಗಾಗಿ ನೀಡಿದೆ. ಅವುಗಳನ್ನು ನಿಮ್ಮ ಮುಂದೆ ಸವಿವರವಾಗಿ ಬಿಚ್ಚಿದುವುದೇ ಈ ಲೇಖನದ ಉದ್ದೇಶವಾಗಿದೆ.

ayush-ministry-advises-some-steps-gain-immunity-power

ಈಗ ಎಲ್ಲೆಂದರಲ್ಲಿ ಕೊರೊನಾ ವೈರಸ್ ನದ್ದೇ ಸುದ್ದಿ… ಇದು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ನಿಖರವಾದ ಔಷಧಗಳಿಲ್ಲ. ಆದರೆ ನಮ್ಮ ಪುರಾತನ ಆಯುರ್ವೇಧ ಪದ್ದತಿಯಲ್ಲಿ ವೈರಸ್ ಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹಲವಾರು ವಿಧಾನಗಳನ್ನು ತಿಳಿಸಿದ್ದಾರೆ. ಇವುಗಳಿಂದ ಕೊವಿಡ್-19 ವೈರಸ್ ನಿಯಂತ್ರಿಸುವ ಅವಕಾಶಗಳಿವೆಯೇ ಎನ್ನುವುದನ್ನು ಇನ್ನು ಮೇಲಷ್ಟೆ ಪ್ರಯೋಗಗಳು ನಡೆದು ತಿಳಿಯಬೇಕಿದೆ. ಆದರೆ ಈ ವೈರಸ್ ವಿರುದ್ದ ಹೋರಾಡಲು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಪ್ರಭಲವಾಗಿರುವುದು ಅತ್ಯವಶ್ಯವಾಗಿದೆ. ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೆಧದಲ್ಲಿ ತಿಳಿಸಲಾಗಿರುವ ಕ್ರಮಗಳನ್ನು ನಮ್ಮ ಆಯುಷ್ ಇಲಾಖೆಯು ತಿಳಿಸಿದ್ದು, ಆ ವಿಧಾನಗಳು ಯಾವವು ಎನ್ನುವುದನ್ನು ನಿಮ್ಮೆಲ್ಲರಿಗೆ ತಿಳಿಸುವ ಉದ್ಧೆಶವನ್ನು ಇಟ್ಟುಕೊಂಡು ನಾವಿಂದು ನಿಮ್ಮ ಮುಂದೆ ಈ ಲೇಖನ ತರುತ್ತಿದ್ದೇವೆ.

ಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಆಹಾರಗಳು

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುಷ್ ಇಲಾಖೆಯು ಹಲವಾರು ಸಲಹೆಗಳನ್ನು ನೀಡಿದ್ದು, ಅವುಗಳಲ್ಲಿ ಮೊದಲನೆಯದು ಈ ರೀತಿಯಾಗಿ ಇದೆ. 

  • ಪ್ರತಿದಿನ ಬೆಳಗ್ಗೆ ಕನಿಷ್ಠ ಅರ್ಧ ಗಂಟೆಗಳಷ್ಟಾದರೂ ಯೋಗಾಸನ, ಧ್ಯಾನ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿ. 
  • ಕುಡಿಯಲು ಬಿಸಿನೀರನ್ನೇ ಬಳಸುವುದು ಉತ್ತಮ.
  • ಅಡುಗೆಗೆ ಬೆಳ್ಳುಳ್ಳಿ, ಅರಿಶಿನ, ಜೀರಿಗೆ, ಲವಂಗ, ಹವೀಜ,ಕಾಳುಮೆಣಸು ಚೆನ್ನಾಗಿ ಬಳಸಿ.
  • ಬೆಳಿಗ್ಗೆ ಒಂದು ಚಮಚ ಚವನ್ ಪ್ರಾಶ್ ಸೇವಿಸುವುದು ಉತ್ತಮ.

ಇದನ್ನೂ ಓದಿರಿ: ಸ್ಯಾನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾನಿಟೈಸರ್ ಬಳಸುತ್ತಿದ್ದೀರೆ ಎಚ್ಚರ..!

ayush-ministry-advises-some-steps-gain-immunity-power

ಈ ಸಲಹೆಗಳು ನಮ್ಮ ಈ ಲಾಕ್ ಡೌನ್ ಸಮಯದಲ್ಲಿ ನಿರ್ವಹಿಸಲು ಯೂಗ್ಯವಾಗಿದ್ದು, ಸಮಯ ಕಳೆಯುವ ಜೊತೆಗೆ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಲು ಸಹಾಕಾರಿಯಾಗುತ್ತದೆ. ಕೇವಲ ಇವಷ್ಟೇ ಅಲ್ಲದೆ ಇನ್ನೂ ಕೆಲವು ಸಲಹೆಗಳಿವೆ ಅವುಗಳನ್ನು ನೋಡೋಣ..

  • ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿ ಹಾಕಿದ ಕಷಾಯವನ್ನು ಕುಡಿಯಿರಿ.
  • ಗಿಡಮೂಲಿಕೆಗಳನ್ನು ಹಾಕಿದ ಚಹವನ್ನು ಕುಡಿಯಿರಿ. ಸಕ್ಕರೆಯ ಬದಲು ಬೆಲ್ಲವನ್ನು ಬಳಸಿರಿ.
  • 150 ಮಿಲಿ ಹಾಲಿಗೆ ಅರ್ಧ ಟಿ ಸ್ಪೂನ್ ಅರಿಶಿನವನ್ನು ಹಾಕಿದ ಬಂಗಾರದ ಹಾಲನ್ನು ಕುಡಿಯಿರಿ. ಇದು ನಿಮ್ಮ ಗಂಟಲಿನ ಸಮಸ್ಯೆಗಳಿಂದ ದೂರವಿಡುತ್ತದೆ.

ಈ ಸಲಹೆಗಳು ನಿಮ್ಮನ್ನು ರೋಗಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಹಾಗಾಗಿ ನೀವು ಕಂಡಿತವಾಗಿ ಈ ಸಲಹೆಗಳನ್ನು ಪಾಲಿಸಬಹುದು. ಅಲ್ಲದೇ ಇಂಗ್ಲಿಷ್ ಮೆಡಿಸಿನ್ ಗಳಂತೆ ಯಾವುದೇ ಹಾನಿಯೂ ಇದರಿಂದ ಉಂಟಾಗುವುದಿಲ್ಲ.

  • ದಿನಕ್ಕೆರಡು ಬಾರಿ ಮೂಗಿನ ಹೊಳ್ಳೆಗಳಿಗೆ ತುಪ್ಪ, ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಿ. 
  • ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಒಂದು ಟೀ ಸ್ಪೂನಿನಷ್ಟು ತೆಗೆದುಕೊಂಡು ಬಾಯಿಗೆ ಹಾಕಿ ಹಾಗೆಯೇ ಎರಡು ನಿಮಿಷ ಬಾಯಿಗೆ ಚೆನ್ನಾಗಿ ಎಲ್ಲೆಡೆ ತಾಗುವಂತೆ ಮಾಡಿ ನಂತರ ಬಿಸಿ ನೀರನ್ನು ಬಳಸಿ ಮುಕ್ಕಳಿಸಿ ಉಗಿಯಿರಿ. ಈ ರೀತಿ ದಿನಕ್ಕೆರಡು ಬಾರಿ ಮಾಡಬಹುದು. 

ಇದನ್ನೂ ಓದಿರಿ: ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?

ಈ ಸಲಹೆಗಳು ವಿಶೇಷವಾಗಿದ್ದು, ಆಯುರ್ವೆಧದ ಪ್ರಮುಖ ಚಿಕಿತ್ಸೆಗಳಲ್ಲಿನ ಸಲಹೆಯಾಗಿದೆ. ಇದು ಪ್ರತಿಮಾರ್ಶ ನ್ಯಸ್ಯ ಮತ್ತು ಆಯಿಲ್‌ ಪುಲ್ಲಿಂಗ್‌ ಎಂಬ ಚಿಕಿತ್ಸೆಯಾಗಿದೆ. ಇವುಗಳ ಜೊತೆಯಲ್ಲಿ ಒಣ ಕೆಮ್ಮು ಮತ್ತು ಗಂಟಲು ಕೆರೆತದಂತಹ ಸಮಸ್ಯೆಗಳಿದ್ದರೆ ಅವುಗಳ ಪರಿಹಾರಕ್ಕಾಗಿ ಕೆಲವು ಸಲಹೆಗಳನ್ನು ನೀಡಿದೆ.

ayush-ministry-advises-some-steps-gain-immunity-power

  • ಒಣ ಕೆಮ್ಮು ನಿಮ್ಮನ್ನು ಕಾಡುತ್ತಿದ್ದರೆ, ಬಿಸಿ ನೀರಿಗೆ ಪುದಿನಾ ಎಳೆಗಳು ಮತ್ತು ಒಮಕಾಳನ್ನು ಹಾಕಿ ಅದರ ಹೊಗೆಯನ್ನು ತೆಗೆದುಕೊಳ್ಳಬೇಕು.
  • ಲವಂಗದ ಪುಡಿ, ಬೆಲ್ಲ ಅಥವಾ ಜೇನುತುಪ್ಪವನ್ನು ಬೆರೆಸಿಕೊಂಡು ದಿನಕ್ಕೆ ಎರಡು ಬಾರಿಯಂತೆ ತೆಗೆದುಕೊಳ್ಳಿ.

ಈ ಸಲಹೆಗಳು ಸಾಮಾನ್ಯವಾಗಿ ಉಂಟಾಗುವ ಕೆಮ್ಮಿನ ಸಮಸ್ಯೆಯನ್ನು ದೂರಮಾಡಬಲ್ಲವಾಗಿದೆ. ಇವುಗಳಿಗೆ ಕಡಿಮೆಯಾಗದಿದ್ದರೆ ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ. ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡುವುದು ಅಪಾಯಕ್ಕೆ ಕಾರಣವಾಗಬಹುದು. 

ಈ ಸಲಹೆಗಳನ್ನು ಆಯುಷ್ ಮಂತ್ರಾಲಯ ಭಾರತೀಯ ಪ್ರಸಿದ್ಧ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋ ಪತಿ ವೈಧ್ಯಕೀಯ ಶಸ್ತ್ರಗಳಿಂದ ಆಯ್ಕೆ ಮಾಡಿಕೊಂಡಿದೆ. ಇವುಗಳು ನಿಮಗೆ ರೋಗಗಳು ಬರದಂತೆ ತಡೆಗಟ್ಟಲು ಸಹಾಯಕವಾಗುತ್ತದೆ. ಅಲ್ಲದೇ ಈ ಸಲಹೆಗಳನ್ನು ತಪ್ಪದೆ ಪಾಲಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಳವಾಗುತ್ತದೆ. 

ಇದನ್ನೂ ಓದಿರಿ: ಪರಿಮಳಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಈ ಕರಿಬೇವು

ಸ್ನೇಹಿತರೆ ಈ ಸಲಹೆಯನ್ನು ನಿಮ್ಮ ಆರೋಗ್ಯದ ಹಿತವನ್ನು ಕಾಯುವ ದೃಷ್ಟಿಯಿಂದ ತಿಳಿಸಲಾಗಿದೆ. ಈ ಮಾಹಿತಿಯು ನಿಮಗೆ ಉಪಯುಕ್ತವಾಗುತ್ತವೆ ಎಂದು ಭಾವಿಸುತ್ತೇವೆ. ನಮ್ಮ ಇಂತಹ ಉತ್ತಮ ಸಲಹೆಗಳನ್ನು ತಪ್ಪದೆ ಪಡೆಯಲು ನಮ್ಮ ನೋಟಿಫಿಕೇಶನ್ ಬಟನ್ ಕ್ಲಿಕ್ ಮಾಡಿಕೊಳ್ಳಿ ಮತ್ತು ಇತರರಿಗೆ ಸಹಾಯವಾಗಲು ಶೇರ್ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here