ನೇಕಾರರ ಮಕ್ಕಳಿಗೆ `ವಿದ್ಯಾನಿಧಿ ಯೋಜನೆ’ಯಡಿ ವಿದ್ಯಾರ್ಥಿವೇತನ – ಬಸವರಾಜ ಬೊಮ್ಮಾಯಿ

ಸಾರ್ವತ್ರಿಕ ರಜಾ ದಿನಗಳ ಪಟ್ಟಿ | good-news-for-farmers-further-scheme-implemented-to-double-farmers-income-cm-bommai

ಬೆಂಗಳೂರು: ನೇಕಾರರ ಮಕ್ಕಳಿಗೆ ರಾಜ್ಯ ಸರಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿದ್ಯಾನಿಧಿ ಯೋಜನೆಯಡಿ ನೇಕಾರರ 46,000 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ‘ನೇಕಾರ ಸಮ್ಮಾನ್ ಯೋಜನೆ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೈಮಗ್ಗ ನೇಕಾರರು ಕೊರೋನಾ ಸಂಕಷ್ಟದಿಂದಾಗಿ ತೊಂದರೆಗೆ ಸಿಲುಕಿದ್ದಾರೆ. ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ವಾರ್ಷಿಕ 5000 ರೂ. ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿರಿ: ಬಿಎಸ್‌ಎನ್‌ಎಲ್ ನಿಂದ ಶೀಘ್ರವೇ 4ಜಿ, 5ಜಿ ಸೇವೆ ಆರಂಭ – ಅಶ್ವಿನಿ ವೈಷ್ಣವ್

ಇದೆ ಸಮಯದಲ್ಲಿ ನೇಕಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಹೇಳಿದರು. ಈ ಯೋಜನೆಯಲ್ಲಿ ವಿದ್ಯಾರ್ಥಿವೇತನ ಪಡೆಯಲು 46000 ವಿದ್ಯಾರ್ಥಿಗಳ ಪಟ್ಟಿಯನ್ನು ಶೀಘ್ರವೇ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ವಿದ್ಯಾನಿಧಿ ಮಕ್ಕಳ ಹಕ್ಕು, ಆ ಕಾರಣದಿಂದಾಗಿ ಮಕ್ಕಳಿಂದ ಯಾವುದೇ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ಬದಲಾಗಿ 46000 ನೇಕಾರರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಶೀಘ್ರದಲ್ಲಿಯೇ ನೇರವಾಗಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿರಿ: ಕೈಮಗ್ಗ ನೇಕಾರರಿಗೆ ‘ನೇಕಾರ ಸಮ್ಮಾನ್’ ಯೋಜನೆಯ ಮೂಲಕ 5000 ನಗದು

LEAVE A REPLY

Please enter your comment!
Please enter your name here