ಚೆಕ್ ಬೌನ್ಸ್ ಪ್ರಕರಣ: ಮಠ ನಿರ್ದೇಶಕ ಗುರುಪ್ರಸಾದ್ ಗೆ ಜಾಮೀನು

director-and-actor-matha-guru-prasad-arrested-in-check-bounce-case

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಇಂದು ಬಂಧಿಸಿದ್ದರು.

ಶ್ರೀನಿವಾಸ್ ಎನ್ನುವವರಿಂದ 30 ಲಕ್ಷ ರೂಪಾಯಿಗಳನ್ನು 2016 ರಲ್ಲಿ ಪಡೆದುಕೊಂಡು ಹಿಂದಿರುಗಿಸದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಪ್ರಕರಣ ಕುರಿತಂತೆ 21 ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಈ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 7 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿರಿ: ಮಠ ಖ್ಯಾತಿಯ ಗುರುಪ್ರಸಾದ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಅರೆಸ್ಟ್

LEAVE A REPLY

Please enter your comment!
Please enter your name here