ಬಿಲ್ಲವ ಸಮುದಾಯವನ್ನು ಸರ್ಕಾರ ಈ ರೀತಿ ವಂಚಿಸುತ್ತಿರುವುದು ನ್ಯಾಯೋಚಿತವಲ್ಲ – ಪ್ರವೀಣ್ ಎಂ ಪೂಜಾರಿ

it-is-not-fair-that-the-government-is-deceiving-the-billava-community-in-this-way

ಉಡುಪಿ: ಇಂದು ನಡೆದ ವಿಶೇಷ ಬಿಲ್ಲವ ಯುವ ವೇದಿಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರವೀಣ್ ಪೂಜಾರಿ ಅವರು, ರಾಜ್ಯ ಸರಕಾರ ವಿವಿಧ ಜಾತಿ ಸಮುದಾಯಗಳ ನಿಗಮ ಮತ್ತು ಪ್ರಾಧಿಕಾರದ ಬೇಡಿಕೆಯನ್ನು ಈಡೇರಿಸಿದ್ದು ಸಮರ್ಥನೀಯ. ಆದರೆ ನಮ್ಮ ಬಿಲ್ಲವ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ರೀತಿ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ‌. ಹಲವಾರು ಉಪ ಪಂಗಡಗಳನ್ನು ಒಳಗೊಂಡಿರುವ ಮತ್ತು ಸಂಖ್ಯಾಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯ ಇಲ್ಲಿಯವರೆಗೆ ಹಲವಾರು ಬೇಡಿಕೆಗಳ ಕುರಿತು ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ, ತಾತ್ಸಾರ ತೋರಲಾಗುತ್ತಿದೆ.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ 50,000 ಸಮಾಜ ಬಾಂಧವರನ್ನು ಒಗ್ಗೂಡಿಸಿ ಬೃಹತ್ ಬಿಲ್ಲವ ಸಮಾವೇಶದ ಮುಖಾಂತರ “ಬ್ರಹ್ಮ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ” ಸ್ಥಾಪಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ಸರಕಾರದ ಮುಂದೆ ಇಡಲಾಗಿದೆ. ಇದಲ್ಲದೆ ಹಲವಾರು ಬೇಡಿಕೆಗಳ ಈಡೇರಿಸುವಂತೆ ಪದೇ ಪದೇ ಕರಾವಳಿಯ ಜನಪ್ರತಿನಿಧಿಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾಗ್ಯೂ ನಕಾರಾತ್ಮಕ ಪ್ರತಿಕ್ರಿಯೆ ಬರುತ್ತಿರುವುದು ಬೇಸರದ ಸಂಗತಿಯಾಗಿದೆ.

ಜನಪ್ರತಿನಿಧಿಗಳು ಕೇವಲ ಚುನಾವಣೆ ಸಂದರ್ಭ ಮಾತ್ರ ಬಿಲ್ಲವ ಸಮಾಜವನ್ನು ಬಳಸಿಕೊಳ್ಳುತ್ತಿರುವ ಹುನ್ನಾರದ ಕುರಿತು ಸಮಾಜ ಜಾಗೃತಗೊಳ್ಳುತ್ತಿದೆ. ಕರಾವಳಿಯ ಶಾಸಕರು, ಸಂಸದರು ಮತ್ತು ಎಲ್ಲಾ ಸ್ತರದ ಜನಪ್ರತಿನಿಧಿಗಳು ಕೇವಲ ಸಭಾವೇದಿಕೆಯ ಭಾಷಣಕ್ಕೆ ಮಾತ್ರ ಬಿಲ್ಲವ ಸಮಾಜದ ಒಲೈಕೆ ಮಾಡುತ್ತಾ ಯಾವುದೇ ಅನುಕೂಲ ಮಾಡದಿರುವ ಕುರಿತು ಭವಿಷ್ಯದಲ್ಲಿ ಸಮಾಜ ಬಾಂಧವರು ಇಂತವರ ವಿರುದ್ದ ಸೂಕ್ತ ನಿರ್ಧಾರ ಕೈಗೊಳ್ಳಲು ಪ್ರೇರಣೆ ನೀಡಿದೆ. ಇತರ ಸಮುದಾಯಕ್ಕೆ ಮಂಜೂರಾಗುತ್ತಿರುವ ಎಲ್ಲಾ ಅನುಕೂಲತೆಗಳಲ್ಲಿ ಬಿಲ್ಲವ ಸಮುದಾಯವನ್ನು ವಂಚಿಸುತ್ತಿರುವುದು ನ್ಯಾಯೋಚಿತವಲ್ಲ ಎಂದು ಬಿಲ್ಲ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ ಪೂಜಾರಿ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here