ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕರ್ನಾಟಕದ ಪ್ರಥಮ ದರ್ಜೆ ಕ್ರಿಕೆಟರ್ ಅರ್ಜುನ್ ಹೊಯ್ಸಳರೊಂದಿಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ವರ್ಷ ಕೋವಿಡ್ ಸೋಂಕಿನಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಸಹೋದರಿ ಮತ್ತು ತಾಯಿಯನ್ನು ಕಳೆದುಕೊಂಡಿದ್ದರು. ಇದೀಗ ತಾಯಿಯ ಹುಟ್ಟು ಹಬ್ಬದ ದಿನವೇ ಅಂದರೆ ಜನವರಿ 12 ರಂದು ಸರಳವಾಗಿ ನ್ಯಾಯಾಲಯದಲ್ಲಿ ಇಬ್ಬರೂ ವೈವಾಹಿಕ ನೋಂದಣಿಗೆ ಸಹಿ ಹಾಕುವ ಮೂಲಕ ವಿವಾಹವಾಗಿದ್ದಾರೆ.
ಈ ವಿಷಯವನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ “ಮಿಸ್ಟರ್ ಅಂಡ್ ಮಿಸಸ್!!!” ಎಂದು ಬರೆದುಕೊಂಡಿದ್ದಾರೆ. ಈ ಸಮಯದಲ್ಲಿ ತಮ್ಮ ತಾಯಿ ಮತ್ತು ಅಕ್ಕನನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ.
ಇದನ್ನೂ ಓದಿರಿ: ವೇಷ ಬದಲಾಯಿಸಿ ಗುಜರಾತಿನಲ್ಲಿ ತಲೆಮರೆಸಿಕೊಂಡಿದ್ದ ‘ಸ್ಯಾಂಟ್ರೋ ರವಿ’ ಸೇರಿ ನಾಲ್ವರ ಸೆರೆ