ಉತ್ತರ ಪ್ರದೇಶ: ಎಂಟು ಜನ ಪೊಲೀಸ್ ಅಧಿಕಾರಿಗಳನ್ನು ಕೊಂದ ಕುಖ್ಯಾತ ಗ್ಯಾಂಗಸ್ಟರ್ ವಿಕಾಸ ದುಬೆಯನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವೀಯಾಗಿದ್ದಾರೆ. ಎರಡು ದಿನದಂದ ಪೊಲೀಸರ ಕಣ್ಣು ಮರೆಸಿ ಒಡಾಡುತಿದ್ದ ಕಿಲ್ಲರ ವಿಕಾಶ ದುಬೆಯನ್ನು ಮಧ್ಯಪ್ರದೇಶದ ಉಜ್ಜಯಿನಿ ಬಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಪೊಲೀಸರು ಏನ್ ಕೌಂಟರ್ ಮಾಡುವ ಭಯದಲ್ಲಿ ಮಧ್ಯಪ್ರದೇಶಕ್ಕೆ ಓಡಿಬಂದಿದ್ದ ಈತ, ಇಂದು ಪೊಲೀಸರಿಗೆ ಶರಣಾಗಿದ್ದಾನೆ. ಸಧ್ಯ ಮಧ್ಯಪ್ರದೇಶದ ಪೋಲೀಸರ ವಶದಲ್ಲಿರುವ ದುಬೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ ಉತ್ತರ ಪ್ರದೇಶದ ಪೊಲೀಸರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿರಿ: ಗಲ್ವಾನ್ ನ ವಿವಾದಿತ ಪ್ರದೇಶದಿಂದ 2 ಕಿ.ಮೀ. ಹಿಂದಕ್ಕೆ ಸರಿದ ಚೀನಾ ಸೇನೆ
60 ಕ್ಕೂ ಅಧಿಕ ಅಪರಾಧ ಪ್ರಕರಣಗಳ ಆರೋಪ ಹೊಂದಿರುವ ವಿಕಾಶ ದುಬೆಯನ್ನು ಬಂದಿಸಲು ಪೊಲೀಸರು ಕಳೆದ ಶುಕ್ರವಾರ ದಿಕ್ರು ಗ್ರಾಮಕ್ಕೆ ತೆರಳಿದ್ದರು. ಬಂದಿಸಲು ಬಂದಿದ್ದ ಪೋಲೀಸರ ಮೇಲೆ ದಾಳಿ ಪೂರ್ವ ನಿಯೋಜಿತ ದಾಳಿ ನಡೆಸಿದ ದುಬೆ ಮತ್ತು ಆತನ ಸಹಚರು 8 ಪೋಲಿಸ್ ಅಧಿಕಾರಿಗಳ ಸಾವಿಗೆ ಕಾರಣರಾಗಿದ್ದರು. ನಂತರ ವಿಕಾಸ್ ದುಬೆ ಮತ್ತು ಆತನ ಸಹಚರರು ನಾಪತ್ತೆಯಾಗಿದ್ದರು.
Vikas Dubey was going to Ujjain Mahakal temple when he was identified by security personnel. Police were informed, he confessed his identity after being pushed for it. He has been apprehended by police & interrogation is underway: Ashish Singh, Ujjain Collector #MadhyaPradesh https://t.co/tBNHn3pwuw
— ANI (@ANI) July 9, 2020