ಬೆಂಗಳೂರು: ನಮ್ಮ ನೆಚ್ಚಿನ ಅಣ್ಣಾವ್ರ ಜನುಮದಿನವಾದ ಇಂದು ಅವರ ಸಮಾಧಿಗೆ ಇಡಿ ಕುಟುಂಬ ಬೇಟಿ ನೀಡಿ ಪುಷ್ಪಾರ್ಚನೆ ಮಾಡಿದೆ. ಈ ಬಾರಿ ಕೊರೊನಾ ವೈರಸ್ ಹಾವಳಿಯಿರುವುದರಿಂದ ಜನುಮದಿನವನ್ನು ಸರಳವಾಗಿ ಕುಟುಂಬದ ಸದಸ್ಯೆರೆ ಸೇರಿ ಆಚರಿಸಿದ್ದಾರೆ. ಈ ನಡುವೆ ನಟಸಾರ್ವಭೌಮನನ್ನು ಹಲವು ಗಣ್ಯರು ಸ್ಮರಿಸಿದ್ದಾರೆ.
1954 ರಲ್ಲಿ ತೆರೆಕಂಡ ಬೇಡರಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡ ರಾಜ್ ಕುಮಾರ್ ಅವರ ಅದ್ಭುತ ನಟನೆ ಜನರಲ್ಲಿ ಅಚ್ಚಳಿಯದೆ ಉಳಿಯಿತು. ಆ ನಂತರದಲ್ಲಿ ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ ಸೇರಿದಂತೆ ಅನೇಕ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಅದ್ಭುತ ನಾಯಕ ನಟನಾಗಿ ಹೊರಹೊಮ್ಮಿದ್ದಲ್ಲದೆ 200 ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡ ಏಕೈಕ ನಟನಾಗಿ ಉಳಿದಿದ್ದಾರೆ. ಇವರು 1968 ರಲ್ಲಿ ನಟ ಸಾರ್ವಭೌಮ ಎಂಬ ಗೌರವವನ್ನು ಪಡೆದರು.
ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿರದೆ ಹಿನ್ನೆಲೆ ಗಾಯಕರಾಗಿಯೂ ಹಲವಾರು ಚಿತ್ರಗಳಿಗೆ ಧ್ವನಿಯಾಗಿದ್ದಾರೆ. 1971 ರಲ್ಲಿ ತೆರೆಕಂಡ ‘ಕಸ್ತೂರಿ ನಿವಾಸ’, ‘ಬಂಗಾರದ ಮನುಷ್ಯ’ ಅಂತಹ ಚಿತ್ರಗಳು ಇಂದಿಗೂ ತನ್ನ ಜನಪ್ರೀಯತೆಯನ್ನು ಉಳಿಸಿಕೊಂಡಿರುವುದು ಅವರ ನಟನೆಗೆ ಜನರು ಮಾರುಹೊಗಿರುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಇವರ ಕಲಾ ಸೇವೆಯನ್ನು ಗಮನಿಸಿದ ಮೈಸೂರು ವಿಶ್ವವಿದ್ಯಾಲಯವು 1976 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಇಂತಹ ನಟನಾ ಸಾಮರ್ತ್ಯವನ್ನು ಹೊಂದಿದ ಕಲಾವಿದನಿಗೆ ದೇಶದ ಹಲವಾರು ಜನರು ಶರಣಾಗಿದ್ದು, ಅವರ 91ನೇ ಜನುಮದಿನವಾದ ಇಂದು ಡಾ. ರಾಜ್ ಅವರ ನಡುವಿನ ಒಡನಾಟದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಹಾನ್ ನಟನ ನೆನಪನ್ನು ಹೊರಹಾಕಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಟರಾದ ರಮೇಶ ಅರವಿಂದ್, ಶಿವರಾಜ್ ಕುಮಾರ್, ದರ್ಶನ್, ಪುನಿತ್ ರಾಜಕುಮಾರ್ ಸೇರಿದಂತೆ ಹಲವರ ಟ್ವಿಟರ್ ಲಿಂಕನ್ನು ಈ ಕೆಳಗೆ ಹಂಚಿಕೊಂಡಿದ್ದೇವೆ.
ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರು ಕನ್ನಡ ಸಂಸ್ಕೃತಿಗೆ ನೀಡಿದ ಅವಿಸ್ಮರಣೀಯ ಕೊಡುಗೆಯನ್ನು ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮೆಲುಕು ಹಾಕೋಣ.@BSYBJP pic.twitter.com/gDyMJW7eDJ
— CM of Karnataka (@CMofKarnataka) April 24, 2020
ಕಲೆ ಹಾಗೂ ವಿನಯತೆಯ ಅಪೂರ್ವ ಸಂಗಮವಾಗಿರುವ ಡಾ. ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭ ನಮನಗಳು. ಬೆಳ್ಳಿಪರದೆ ಹಾಗೂ ನಿಜಜೀವನದಲ್ಲೂ ಬಂಗಾರದ ಮನುಷ್ಯನಂತಿದ್ದ ಡಾ.ರಾಜಣ್ಣನವರಿಗೆ ಕನ್ನಡ ನಾಡು ಹಾಗು ನುಡಿಯ ಬಗ್ಗೆ ಇದ್ದ ಅದಮ್ಯ ಕಾಳಜಿ ಇಂದಿನ ಯುವಜನಾಂಗಕ್ಕೆ ಮಾದರಿ.#DrRajkumar pic.twitter.com/d6Evdl0nhB
— H D Devegowda (@H_D_Devegowda) April 24, 2020
‘ಅಭಿಮಾನಿಗಳೇ ದೇವರು’ ಎಂದು ಬಣ್ಣಿಸಿದ ವರನಟ ಡಾ. ರಾಜಕುಮಾರ್ ಅವರ ಜನುಮ ದಿನ ಇಂದು. ಅವರ ನೆನಪು ಎಂದೆಂದಿಗೂ ಅಮರ. ನಾಡುನುಡಿಯ ಬಗ್ಗೆ ಅವರ ನಿಲುವು ಅನುಕರಣೀಯ.
— H D Kumaraswamy (@hd_kumaraswamy) April 24, 2020
1/2
ಕನ್ನಡ ಚಿತ್ರರಂಗ ಮಾತ್ರವಲ್ಲ, ಕನ್ನಡನಾಡು ಎಂದೂ ಮರೆಯದ ಸಾಂಸ್ಕೃತಿಕ ಶಕ್ತಿ ಎಂದರೆ ಕನ್ನಡಿಗರ ಕಣ್ಮಣಿ, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್! ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಗೆದ್ದ ಡಾ.ರಾಜ್ ಅವರ ಕಲಾ ಪ್ರೌಢಿಮೆಯ ಜೊತೆಗೆ ಅವರ ಜೀವನ ಮೌಲ್ಯಗಳೂ ಕೂಡ ಆದರ್ಶ, ಅನುಕರಣೀಯ. ಸಮಸ್ತ ಕನ್ನಡಿಗರಿಗೂ ಡಾ.ರಾಜ್ ಕುಮಾರ್ ಜನ್ಮದಿನದ ಶುಭಾಶಯಗಳು. pic.twitter.com/7ln43NhTCr
— Dr Sudhakar K (@mla_sudhakar) April 24, 2020
He released AmericaAmerica audio and hugged me..After 20 odd years I can still feel the warmth..Legend for a reason #Dr.Rajkumar pic.twitter.com/KFbNQJWdi4
— Ramesh Aravind (@Ramesh_aravind) April 24, 2020
Happy birthday Appaji, you are always with us pic.twitter.com/ejtdboQE19
— DrShivaRajkumar (@NimmaShivanna) April 24, 2020
ಎಲ್ಲರಿಗೂ ನಮಸ್ಕಾರ..
— Puneeth Rajkumar (@PuneethRajkumar) April 24, 2020
ಅಪ್ಪಾಜಿಯವರಿಗೆ ಜನ್ಮ ದಿನಾಚರಣೆಯ ಶುಭಾಶಯಗಳು..
Happy birth anniversary to Appaji.https://t.co/eTCJRRI0Ot
All the artists who have worked here did the artistic contribution from their home.
#StayHome #StaySafe #IndiaFightsCorona
ಇಂದು ವರನಟ ಡಾ|| ರಾಜಕುಮಾರ್ ಅವರ ಪುಣ್ಯಸರಣೆ. ಅಣ್ಣಾವ್ರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ. ಕಸ್ತೂರಿ ಕನ್ನಡ ಅವರ ಬಾಯಲ್ಲಿ ಕೇಳೋದೇ ಒಂದು ಚೆಂದ.
— Darshan Thoogudeepa (@dasadarshan) April 12, 2020
ನಿಮ್ಮ ದಾಸ ದರ್ಶನ್ pic.twitter.com/vOZA2ykDlh
ಯಾವಾಗ್ಲೂ ಹತ್ರ, ಯಾವತ್ಗೂ ಹತ್ರ 🥰 Check my blog now. https://t.co/IMnXm9QszZ #Babeknows pic.twitter.com/eTAtQ2vSA4
— HariPrriya (@HariPrriya6) April 24, 2020
Honored to have had such rare opportunities with this great Legend.
— Kichcha Sudeepa (@KicchaSudeep) April 24, 2020
ಡಾ.ರಾಜ್ ಕುಮಾರ್ ಅಣ್ಣಾವ್ರ ರಿಗೆ ಜನ್ಮದಿನದ ಶುಭಾಶಯಗಳು. 🙏🏼🙏🏼 pic.twitter.com/7kDXNKu12b
ಮರೆಯಲಾಗದ ಮುತ್ತು,ಕನ್ನಡಿಗರ ಆರಾಧ್ಯ ದೈವ,ಸಕಲ ಕಲಾವಲ್ಲಭ ರಾಜಣ್ಣ ಅವ್ರಿಗೆ ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು 🙏😍😘#HBDDrRajKumar #TheNameIsYash #KGFChapter2 #TeamBeingYash pic.twitter.com/ZZcfxc893F
— Being Yash™ (@BeingNimmaYash) April 24, 2020