ದೆಹಲಿ: ನವರಾತ್ರಿಯ ಕೊನೆಯದಿನ ವಿಜಯದಶಮಿಯ ನಿಮಿತ್ತ ಇಂದು ದೆಹಲಿಯ ದ್ವಾರಕಾದಲ್ಲಿ ರಾವಣ ದಹನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿಯವರು ರಾವಣನ ಪ್ರತಿಕೃತಿಗೆ ಬಾಣವನ್ನು ಬಿಡುವ ಮೂಲಕ ದಹನ ಮಾಡಿದರು.
ನವರಾತ್ರಿಯ ಇಂದಿನ ದಿನ ದುಷ್ಟ ರಾವಣನನ್ನು ಶ್ರೀರಾಮಚಂದ್ರ ಸಂಹಾರ ಮಾಡಿದ ಪೌರಾಣಿಕ ಹಿನ್ನೆಲೆಯಲ್ಲಿ ಈ ರಾವಣ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ದುಷ್ಟ ಶಕ್ತಿಗೆ ಅಂತ್ಯಹಾಡಿ ಉತ್ತಮ ನಡತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಈ ಕಾರ್ಯಕ್ರಮ ಸಾರುತ್ತದೆ.
ಇದನ್ನೂಓದಿರಿ: ವಿಜಯದಶಮಿಯಂದೇ ಭಾರತಕ್ಕೆ ಸಿಕ್ತು ರಫೇಲ್ ಎಂಬ ಬ್ರಹ್ಮಾಸ್ತ್ರ..!
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾವಣ ದಹನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ ಮತ್ತು ದಿಷ್ಟ ಶಕ್ತಿಗಳು ತೊಲಗಲಿ ಎಂದು ಹೇಳಿದ್ದಾರೆ.
May the blessings of Prabhu Shri Ram always remain upon us.
May the power of truth, goodness and compassion always prevail.
May evil be eliminated.
Jai Shri Ram! ???????? pic.twitter.com/OCZOLsX7ug
— Narendra Modi (@narendramodi) October 8, 2019