ಬೆಂಗಳೂರು: ಇಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ಧಾನದಿಂದ ದೇಶಿಯ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಕೆಲ ಕಾಲ ಹಾರಾಟ ನಡೆಸಿದರು. ಏರ್ ವೈಸ್ ಮಾರ್ಷಲ್ ಏನ್.ತಿವಾರಿಯವರ ಜೊತೆಯಲ್ಲಿ ಸಹ ಪೈಲೆಟ್ ಆಗಿ ವಿಮಾನದಲ್ಲಿ ಕುಳಿತ ಅವರು ಮಾರ್ಕ್-1 ವೇಗದಲ್ಲಿ ಹಾರಾಟ ನಡೆಸಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್ ತೇಜಸ್ ಯುದ್ಧ ವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ಮಾತನಾಡುತ್ತ, ಅತ್ಯಂತ ಸಾಮರ್ಥ್ಯವನ್ನು ಹೊಂದಿರುವ ಯುದ್ಧ ವಿಮಾನ ಇದಾಗಿದೆ. ಇದರಲ್ಲಿನ ಪ್ರಯಾಣ ತುಂಬಾ ಖುಷಿ ನೀಡಿದೆ ಅಲ್ಲದೇ ಈ ಪೈಟರ್ ಜೆಟ್ ಮೂಲಕ ನಮ್ಮ ರಕ್ಷಣಾ ವ್ಯವಸ್ತೆಯ ಸಾಮರ್ಥ್ಯ ಇನ್ನೂ ಹೆಚ್ಚಲಿದೆ ಎಂದರು.
ಇದನ್ನೂ ಓದಿರಿ: ಪ್ರಧಾನಿ ಮೋದಿಯವರಿಗೆ ಸಿಕ್ಕ ಗಿಪ್ಟ್ ಗಳನ್ನು ನೀವು ಪಡೆದುಕೊಳ್ಳಬಹುದು..!

ತೇಜಸ್ ದೇಶೀಯ ನಿರ್ಮಿತ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯಂತ ಕಾರ್ಯ ಕ್ಷಮತೆಯನ್ನು ಹೊಂದಿದ ಯುದ್ಧ ವಿಮಾನವಾಗಿದೆ. ಈ ಯುದ್ಧ ವಿಮಾನವನ್ನು ಸಂಪೂರ್ಣವಾಗಿ ದೇಶಿಯ ಸಂಸ್ಥೆ ಎಚ್ ಎ ಎಲ್ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಓ) ಸೇರಿ ನಿರ್ಮಿಸಿದೆ. ಇದು ಸಂಪೂರ್ಣ ಕಂಪ್ಯೂಟರಿಕೃತ ನಿಯಂತ್ರಣ ವ್ಯವಸ್ತೆಯನ್ನು ಹೊಂದಿದ್ದು, ಯುದ್ಧದ ಸಮಯದಲ್ಲಿ ತನಗೆ ನೀಡಿದ ಕಾರ್ಯವನ್ನು ನಿಖರವಾಗಿ ನಿರ್ವಹಿಸಲು ಸಹಾಯವಾಗಲಿದೆ.
Flying on ‘Tejas’, an Indigenous Light Combat Aircraft from Bengaluru’s HAL Airport was an amazing and exhilarating experience.
Tejas is a multi-role fighter with several critical capabilities. It is meant to strengthen India’s air defence capabilities. pic.twitter.com/jT95afb0O7
— Rajnath Singh (@rajnathsingh) September 19, 2019
ಇದನ್ನೂ ಓದಿರಿ: ಭಾರತದೊಂದಿಗೆ ಯುದ್ಧವಾದರೆ ಪಾಕಿಸ್ತಾನ ಸೋಲುವುದು ಖಚಿತ ಎಂದ ಇಮ್ರಾನ್ ಖಾನ್..!