ಮೇಷ ರಾಶಿ : ನಿಮ್ಮ ಉದ್ಯೋಗ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆಗಳಿವೆ. ಹಣಕಾಸಿ ವ್ಯವಹಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಆರೋಗ್ಯ ಸ್ಥಿತಿಯು ಸ್ಥಿರವಾಗಿ ಇರಲಿದೆ.
ವೃಷಭ ರಾಶಿ : ಉಧ್ಯಮಿಗಳಿಗೆ ಹೆಚ್ಚಿನ ಪ್ರಯೋಜನಕಾರಿಯಾದ ದಿನವಲ್ಲ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾದ ದಿನವಾಗಿದೆ. ಖರ್ಚು ಹೆಚ್ಚುವ ಸಂಭವ ಎದ್ದು ಕಾಣುತ್ತಿದೆ. ಆರೋಗ್ಯ ಸಮಸ್ಯೆಯು ನಿಮ್ಮನ್ನು ಕಾಡಬಹುದು.
ಮಿಥುನ ರಾಶಿ : ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ನೀಡುವುದು ಉತ್ತಮ. ವಿವಾಹಿತರಿಗೆ ಉತ್ತಮ ದಿನವಾಗಿದೆ. ಭವಿಷ್ಯದ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿ.
ಕರ್ಕಾಟಕ ರಾಶಿ: ಹಣದ ವಿಷಯದಲ್ಲಿ ಉತ್ತಮ ದಿನವಾಗಿದೆ. ನಿಮ್ಮ ಆರೋಗ್ಯಕ್ಕೆ ಆಹಾರವು ಕೆಡುಕನ್ನು ತರಬಹುದು, ಎಚ್ಚರಿಕೆ ಅಗತ್ಯ. ನಿಮ್ಮ ಪ್ರಿತಿಯು ಇಂದು ಯಶಸ್ಸನ್ನು ಕಾಣುತ್ತದೆ. ವೇಗದ ವಾಹನ ಚಲಾವಣೆ ತೊಂದರೆಯನ್ನು ಉಂಟು ಮಾಡಬಹುದು.
ಸಿಂಹರಾಶಿ : ನಿಮ್ಮ ಕೆಲಸಗಳು ಇಂದು ಸುಲಭವಾಗಿ ಕೈಗೂಡುತ್ತದೆ. ಬಹಳ ದಿನಗಳಿಂದ ಒಂದೆಡೆ ನಿಂತ ಕೆಲಸಗಳು ಪ್ರಾರಂಭವಾಗುತ್ತದೆ. ಇಂದು ನಿಮ್ಮ ಮನೆಯಲ್ಲಿ ಸಂತೋಷದ ಘಟನೆ ನಡಯುತ್ತದೆ. ಕುಟುಂಬ ಸದಸ್ಯರ ಜೊತೆಯಲ್ಲಿ ಹಬ್ಬದ ಭೋಜನ ಸವಿಯುತ್ತೀರಿ. ಆರೋಗ್ಯ ಸ್ಥಿತಿಯು ಉತ್ತಮವಾಗಿರುತ್ತದೆ.
ಕನ್ಯಾ ರಾಶಿ : ಆರೋಗ್ಯದಲ್ಲಿ ಕೆಲವು ತೊಂದರೆಗಳು ಕಂಡುಬರಲಿವೆ. ಇದರಿಂದ ಮನೆಯಲ್ಲಿ ಭಯ, ನೋವು ಕಂಡು ಬರಲಿವೆ. ಹಣಕಾಸಿನ ವ್ಯರ್ಥ ಖರ್ಚು ಉಂಟಾಗಬಹುದು. ಹಲವರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಶತ್ರುಗಳು ನಿಮ್ಮನ್ನು ಹಣಿಯಲು ಹಾತೊರೆಯುತ್ತಿದ್ದಾರೆ.
ತುಲಾರಾಶಿ : ಪ್ರಣಯ ಜೀವನವು ಉತ್ತಮವಾಗಿರಲಿದೆ, ಆದರೆ ನಿಮ್ಮಿಬ್ಬರ ನಡುವೆ ಪಾರದರ್ಶಕತೆ ಇರಲಿ. ಕೆಲಸದ ಸ್ಥಳದಲ್ಲಿ ಹೊಂದಾಣಿಕೆ ಕಂಡುಬರಲಿದೆ. ಸಣ್ಣ ಪ್ರಮಾಣದ ಅನಾರೋಗ್ಯ ಕಾಡಬಹುದು. ದೇಹದ ಕಡೆಗೆ ಗಮನ ಹರಿಸುವುದು ಅಗತ್ಯವಾಗಿದೆ.
ವೃಶ್ಚಿಕ ರಾಶಿ : ಕೆಲಸದಲ್ಲಿ ನೀವು ನಿರೀಕ್ಷಿಸಿದ ಪ್ರಗತಿ ದೊರೆಯಲಿದೆ. ಇಂದಿನ ದಿನ ಸಂತೋಷದಿಂದ ಕಳೆಯುವಿರಿ. ಅಧ್ಯಯನದ ಅವಶ್ಯಕತೆ ಇದೆ. ಸಂಗಾತಿಯ ಬೇಡಿಕೆಯನ್ನು ಈಡೇರಿಸಿ. ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಹೂಡಿಕೆ ಮಾಡಲು ಉತ್ತಮ ದಿನವಾಗಿದೆ.
ಧನು ರಾಶಿ : ಕಚೇರಿಯಲ್ಲಿ ನಿಮ್ಮನ್ನು ಸಿಲುಕಿಸಲು ಕೆಲವರು ಜಾಲಹೆಣೆಯುತ್ತಿದ್ದಾರೆ, ಎಚ್ಚರಿಕೆ ಇರಲಿ. ನಿಮ್ಮ ಏಳಿಗೆಯನ್ನು ಸಹಿಸದವರು ನಿಮ್ಮನ್ನು ಕಾಡುತ್ತಾರೆ. ಹಣಕಾಸಿನ ಹರಿವು ಸಾಮಾನ್ಯವಾಗಿದೆ. ಇಂದು ಯಾವುದೇ ತರಹದ ದೂರದ ಪ್ರಯಾಣ ಒಳ್ಳೆಯದಲ್ಲ.
ಮಕರ ರಾಶಿ : ಇಂದು ನೀವು ಸುಖಮಯ ಜೀವನ ಅನುಭವಿಸುವಿರಿ. ಆರ್ಥಿಕವಾಗಿ ಲಾಭವನ್ನು ಇಂದು ಗಳಿಸುವಿರಿ. ಯಾವುದೋ ಒಂದು ಅಹಿತಕರ ಘಟನೆ ನಿಮ್ಮನ್ನು ಚಿಂತೆಗೀಡು ಮಾಡಬಹುದು. ಬೇಸರ ತರಿಸುವ ಸುದ್ದಿಯನ್ನು ಕೇಳುವಿರಿ.
ಕುಂಭ ರಾಶಿ : ಇಂದಿನ ದಿನದ ಆರಂಭ ನಿಮಗೆ ಕಿರಿಕಿರಿ ಉಂಟು ಮಾಡಬಹುದು. ಬೇರೆಯವರ ಭಾವನೆಗಳಿಗೆ ಗೌರವ ನೀಡಿ. ಹಣಕಾಸಿನ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಇಂದು ಉದ್ಯೋಗದ ವಿಚಾರದಲ್ಲಿ ಯಾವುದೋ ಪ್ರಯಾಣವನ್ನು ಮಾಡುವಿರಿ.
ಮೀನ ರಾಶಿ : ನಿಮ್ಮ ನಡವಳಿಕೆಯ ಮೇಲೆ ಹಿಡಿತ ಇಟ್ಟುಕೊಳ್ಳಿ. ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ. ದೂರದ ಪ್ರಯಾಣ ಉತ್ತಮವಲ್ಲ. ನಿಮ್ಮ ನಾಲಿಗೆಯೆ ನಿಮ್ಮ ಶತ್ರುವಾಗಲಿದೆ. ಇಂದಿನ ನಿಮ್ಮ ಮಾತು ಮುಂದೆ ನಿಮ್ಮನ್ನು ಕಾಡಲಿದೆ. ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.