ಈ ದಿನವು ನಿಮಗೆ ಶ್ರೀ ಗಣೇಶನು ಒಳ್ಳೆಯದನ್ನು ಮಾಡಲಿ. ಆ ಮಹಾತ್ಮನನ್ನು ಭಕ್ತಿಯಿಂದ ಬೇಡಿಕೊಳ್ಳಿ. ಆತನ ಸೇವೆಯನ್ನು ಮಾಡಿ. ಆತನ ಜಪವನ್ನು ಮಾಡುವುದರಿಂದ, ಕರುಣಾಮಯನ ಕೃಪೆಯಿಂದ ಎಲ್ಲವೂ ಒಳ್ಳೆಯದಾಗಲಿದೆ. ಗಣೇಶನನ್ನು ನೆನೆಯುತ್ತ ಇಂದಿನ ದಿನಭವಿಷ್ಯದ ಕಡೆಗೆ ನೋಡೋಣ.
ಮೇಷ ರಾಶಿ: ಇಡೀ ಕುಟುಂಬ ಸಂತೋಷದಿಂದ ಇರುವಿರಿ. ಮಾನಸಿಕ ವೇದನೆ ನಿಮ್ಮನ್ನು ಕಾಡಬಹುದು. ಅನಾರೋಗ್ಯಕ್ಕೆ ತುತ್ತಾಗುವ ಸಂಬವ ಕಾಣುತ್ತಿದೆ. ಮಾಟ-ಮಂತ್ರ, ತಂತ್ರ ಭೀತಿ ನಿಮ್ಮನ್ನು ಕಾಡಬಹುದು.
ವೃಷಭ ರಾಶಿ : ನಿಮ್ಮ ಪ್ರಗತಿ ನಿಶ್ಚಿತವಾಗಿದೆ. ಹಣಕಾಸಿನ ಸ್ಥಿತಿಯು ಸುಧಾರಿಸುತ್ತದೆ. ಹಲವು ದಿನಗಳಿಂದ ಸ್ಥಗಿತಗೊಂಡ ಕಾರ್ಯಗಳು ಪುನಃ ಆರಂಭವಾಗುವವು. ಈ ದಿನವು ನಿಮಗೆ ಶುಭ ತರುವುದು.
ಮಿಥುನ ರಾಶಿ : ನಿಮ್ಮ ದಿನದಲ್ಲಿ ತುಂಬಾ ಆತಂಕಗಳು ಬರಬಹುದು. ವ್ಯಾಪಾರ ನಷ್ಟವಾಗಿರಲಿದೆ. ಹಣದ ಪ್ರಾಮುಖ್ಯತೆ ತಿಳಿದುಕೊಳ್ಳಲು ಮುಖ್ಯವಾದ ದಿನ. ಹಣಕಾಸಿನ ಅಗತ್ಯ ಉಂಟಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಗಮನಹರಿಸಬೇಕು.
ಕಟಕ ರಾಶಿ : ನಿಮ್ಮ ಮನಸ್ಸು ಪ್ರಶಂತವಾಗಿರುತ್ತದೆ. ಆಲಸ್ಯ ಪತನವನ್ನು ತಂದೊಡ್ಡಬಹುದು ಎಚ್ಚರವಿರಲಿ. ಕಫ, ಶೀತ, ಅಜೀರ್ಣ ಸಮಸ್ಯೆ ಉಂಟಾಗಬಹುದು. ಧ್ಯಾನ, ಜಪ ಮಾಡುವುದರಿಂದ ಎಲ್ಲ ಪರಿಹಾರ ದೊರೆಯುತ್ತದೆ.
ಸಿಂಹ ರಾಶಿ: ಸಂತೋಷದ ಸುದ್ದಿ ನಿಮ್ಮನ್ನು ಹುಡುಕಿಕೊಂಡು ಬರುವುದು. ವಿದೇಶದ ವ್ಯಾಮೋಹ ಹೊಂದಿದವರಿಗೆ ಹಣಕಾಸಿನಲ್ಲಿ ತೊಂದರೆಯಾಗಬಹುದು. ನಿಮ್ಮ ಕುಟುಂಬದೊಂದಿಗೆ ಇಡೀ ದಿನವನ್ನು ಕಳೆಯುವುದು ಉತ್ತಮ. ಬೇಜವಾಬ್ದಾರಿಯಿಂದ ನೋವನ್ನು ಅನುಭವಿಸುವಿರಿ.
ಕನ್ಯಾ ರಾಶಿ: ನಿಮ್ಮ ಹವ್ಯಾಸಗಳನ್ನು ಮುಂದುವರೆಸುವುದು ಉತ್ತಮ. ಲಾಭ ಪ್ರಮಾಣ ಕುಂಟಿತ. ನಿಮ್ಮ ತಂದೆ, ಹಿರಿಯರ ಆಶೀರ್ವಾದ ಪಡೆಯಿರಿ. ಕುಟುಂಬದ ನಡುವೆ ಸಮಯ ಕಳೆಯುವುದು ಉತ್ತಮ. ನಿಮ್ಮ ದುಃಖ ಮಂಜುಗಡ್ಡೆ ಕರಗಿದ ಹಾಗೆ ಕರಗುತ್ತದೆ.
ತುಲಾ ರಾಶಿ: ನೀವು ಈ ದಿನ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಆಸಕ್ತಿ ಹೊಂದಿರುವ ವಿಷಯದಲ್ಲಿ ತೊಡಗಿಕೊಳ್ಳಿ. ಇಲ್ಲಸಲ್ಲದ ಚಾಡಿ ಹೇಳುವವರ ಮಾತಿಗೆ ಕಿವಿಕೊಡಬೇಡಿ. ಶತ್ರುಗಳಿಂದ ಅಪಜಯ. ಪ್ರಯಾಣಕ್ಕೆ ಅಡೆತಡೆ ಉಂಟಾಗುತ್ತದೆ.
ವೃಶ್ಚಿಕ ರಾಶಿ: ಸಹೋದರ, ಸಹೋದರಿಯಿಂದ ಆರ್ಥಿಕ ನೆರವು ಪಡೆಯಬಹುದು. ನಿಮ್ಮ ಸಂಗಾತಿಯ ಆರೋಗ್ಯವು ನಿಮ್ಮನ್ನು ಚಿಂತೆಗೆ ದೂಡಬಹುದು. ನೀವು ಸಂತೋಷ ನೀಡುವ ಮೂಲಕ ದಿನವನ್ನು ಕಳೆಯುವಿರಿ.
ಧನು ರಾಶಿ : ಈ ದಿನ ನೀವು ಮಾನಸಿಕವಾಗಿ ಅತ್ಯಂತ ದುರ್ಭಲರಾಗುವಿರಿ. ನಿಮ್ಮ ಭವಿಷ್ಯಕ್ಕೆ ಆರ್ಥಿಕ ಯೋಜನೆ ಮಾಡಲು ಉತ್ತಮ ದಿನವಾಗಿದೆ. ಇದು ನಿಮ್ಮನ್ನು ಯಶಸ್ಸಿನೆಡೆಗೆ ಕರೆದೊಯ್ಯುತ್ತದೆ.
ಮಕರ ರಾಶಿ : ನೀವು ಆತಂಕವನ್ನು ಎದುರಿಸುತ್ತಿರಿ. ಈ ದಿನ ನೀವು ಧೈರ್ಯದಿಂದ ಇರುವುದು ಅವಶ್ಯಕವಾಗಿದೆ. ಧೈರ್ಯ ಕಳೆದುಕೊಳ್ಳಬೇಡಿ. ಕಿರಿಯ ವ್ಯಕ್ತಿ ಸಲಹೆಯನ್ನು ನೀಡಿದರೆ ದಿಕ್ಕರಿಸಬೇಡಿ.
ಕುಂಭ ರಾಶಿ : ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಸಂಬಂಧಿಕರು ನಿಮ್ಮ ವೈವಾಹಿಕ ಜೀವನಕ್ಕೆ ಬಂಗ ತರಬಹುದು. ಹಣ ನಿಮ್ಮನ್ನು ಅರಸುತ್ತ ಬರುತ್ತದೆ. ಅನಗತ್ಯ ಖರ್ಚುಗಳಿಗೆ ನಿಯಂತ್ರಣ ಹೇರುವುದು ಒಳಿತು.
ಮೀನ ರಾಶಿ: ಸೃಜನಶೀಲ ಆರ್ಥಿಕತೆಯಿಂದ ಲಾಭ ಹೊಂದುವಿರಿ. ನಿಮಗೆ ಕಮಿಷನ್ ವ್ಯವಹಾರದಿಂದ ಹಣಕಾಸು ಹೆಚ್ಚಳವಾಗುತ್ತದೆ. ತಲೆ ನೋವು ಉಂಟಾಗುತ್ತದೆ. ದಾನ ಮಾಡುವುದರಿಂದ ಜೀವನದಲ್ಲಿ ಪ್ರಗತಿ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.