ಶ್ರೀ ಕ್ಷೇತ್ರಧರ್ಮಸ್ಥಳ ಮಂಜುನಾಥ ಸ್ವಾಮಿಯ ಪಾದಳಿಗೆ ನಮಿಸೋಣ. ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಆನತ ನಾಮಸ್ಮರಣೆಯಿಂದ ಪರಿಹಾರವು ದೊರೆಯುವುದು. ಎಲ್ಲ ಕಷ್ಟಗಳನ್ನು ದೂರಮಾಡಿ, ಉತ್ತಮಜೀವನವನ್ನು ಕರುಣಿಸು ಎಂದು ಬೇಡಿಕೊಳ್ಳುತ್ತ ಇಂದಿನ ರಾಶಿಭವಿಷ್ಯದ ಕಡೆಗೆ ಗಮನ ಹರಿಸೋಣ…
ಮೇಷ: ಈ ದಿನ ಸಹೋದ್ಯೋಗಿಗಳ ಜೊತೆ ತಾಳ್ಮೆ ಇರಲಿ, ಸಾಧ್ಯವಾದಷ್ಟು ಕೋಪವನ್ನು ನಿಯಂತ್ರಿಸುವ ಪ್ರಯತ್ನ ಮಾಡಿ, ಇವತ್ತು ಗುರಿ ಸಾಧನೆಗೆ ಸುಸಮಯ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿ, ಇಷ್ಟಾರ್ಥಗಳು ಸಿದ್ಧಿಯಾಗಲಿದೆ.
ವೃಷಭ: ಈ ದಿನ ಕುಟುಂಬದಲ್ಲಿ ಶಾಂತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಾನಸಿಕ ವ್ಯಥೆ ಉಂಟಾಗಬಹುದು. ಅನಗತ್ಯ ಖರ್ಚನ್ನು ತಡೆಯುವುದು ಉತ್ತಮ. ಆಕಸ್ಮಿಕ ಖರ್ಚು ಉಂಟಾಗಬಹುದು.
ಮಿಥುನ: ಕೆಲಸದಲ್ಲಿ ಗೌರವ, ಇಂದು ಅನ್ಯರ ಮನಸ್ಸು ಗೆಲ್ಲುವಿರಿ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ದಾಂಪತ್ಯದಲ್ಲಿ ವಿರಸ, ಆಲಸ್ಯ ಮನೋಭಾವ, ಅತಿಯಾದ ಕೋಪ, ಆರೋಗ್ಯದಲ್ಲಿ ಏರುಪೇರು.
ಕಟಕ: ನಿಮ್ಮ ಮಾತಿನಲ್ಲಿನ ಕಠೋರತೆಯನ್ನು ಕಡಿಮೆಮಾಡಿಕೊಳ್ಳುವುದು ಉತ್ತಮ, ಇಲ್ಲದಿದ್ದರೆ ನಿಮಗೆ ಇದು ಮುಳುವಾಗಬಹುದು. ಪರಿಶ್ರಮದಿಂದ ಕಾರ್ಯ ಪ್ರಗತಿ, ಆರೋಗ್ಯ ಎಂದಿಗಿಂತಲೂ ಉತ್ತಮವಾಗಿರಲಿದೆ. ವ್ಯಾಪಾರ ಸ್ಥಿತಿ ಸುಧಾರಿಸಲಿದೆ.
ಸಿಂಹ: ಈ ದಿನ ತಾಳ್ಮೆ ಅಗತ್ಯ, ಬಂಡವಾಳ ಹೂಡಿಕೆ ಬೇಡ. ನಿಮ್ಮ ಕೆಲಸಗಳಿಗೆ ಕಾನೂನಿನಿಂದ ತೊಂದರೆ ಉಂಟಾಗಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಸಗಟು ವ್ಯಾಪಾರಸ್ಥರಿಗೆ ನಷ್ಟ, ಚಂಚಲ ಮನಸ್ಸು.
ಕನ್ಯಾ: ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುವ ನಿಮ್ಮ ದೌರ್ಭಲ್ಯವನ್ನು ತಡೆಯಿರಿ. ಇಂದು ಆತ್ಮೀಯರನ್ನು ಭೇಟಿ ಮಾಡುವ ಸಂದರ್ಭ, ಕೆಲಸ ಕಾರ್ಯಗಳಲ್ಲಿ ನಿಧಾನ, ಮಾನಸಿಕ ಗೊಂದಲ. ರಾಜಕೀಯ ಅಥವಾ ಸರಕಾರಿ ನೌಕರರಿಗೆ ನಷ್ಟ.
ತುಲಾ: ಈ ದಿನ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ ಉಂಟಾಗಲಿದೆ. ದಿಡೀರ್ ಹಣಗಳಿಸುವ ಯೋಚನೆ ಬಿಡಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರು.
ವೃಶ್ಚಿಕ: ಇಂದು ವಾಸ ಗೃಹದಲ್ಲಿ ತೊಂದರೆ, ಗಾಯಗಳಾಗುವ ಸಾಧ್ಯತೆ. ನೆಮ್ಮದಿ ಇಲ್ಲದ ಜೀವನ, ಅನ್ಯರ ವಿಚಾರಕ್ಕೆ ಅನಗತ್ಯ ಹಸ್ತಕ್ಷೇಪ. ನಿಮ್ಮ ಆರೋಗ್ಯ ಮಧ್ಯಮವಾಗಿರಲಿದೆ.
ಧನಸ್ಸು: ಈ ದಿನ ಆತ್ಮೀಯರೊಂದಿಗೆ ಮಾತುಕತೆ. ವ್ಯಾಪಾರಿಗಳಿಗೆ ಉತ್ತಮ ದಿನ. ಸಂಗಾತಿಯೊಂದಿಗೆ ಪ್ರೀತಿ ಇನ್ನಷ್ಟು ವೃದ್ದಿ. ಸ್ತ್ರೀಯರಿಗೆ ಅನುಕೂಲ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಪ್ರಗತಿ.
ಮಕರ: ಆತುರ ನಿರ್ಧಾರದಿಂದ ದೂರವಿರಿ. ಪರಿಶ್ರಮದಿಂದ ಅಭಿವೃದ್ಧಿ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ, ದೈವದಲ್ಲಿ ಮೊರೆಹೊಗುವುದರಿಂದ ಪರಿಹಾರ. ಸತತ ಪ್ರಯತ್ನದ ಅವಶ್ಯಕತೆ. ಅನಾರೋಗ್ಯ ಕಾಡಬಹುದು.
ಕುಂಭ: ಇಂದು ಕುಟುಂಬದ ಹೊರೆ ಹೆಚ್ಚು. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಅನ್ಯರಲ್ಲಿ ವೈಮನಸ್ಸು ಕಾಡಲಿದೆ. ಹಣ ಬಂದರೂ ಉಳಿಯವುದಿಲ್ಲ.
ಮೀನ: ಈ ದಿನ ಆರೋಗ್ಯದತ್ತ ಗಮನ ಹರಿಸುವುದು ಅವಶ್ಯಕವಾಗಿದೆ. ವಿಪರೀತ ಹಣ ಖರ್ಚು, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ. ನಿಮ್ಮ ಪ್ರೀತಿ ಮೊದಲಿಗಿಂತಲೂ ಸುಧಾರಣೆಯಾಗುವುದು.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.