ಬೆಂಗಳೂರು: ಸ್ವಾತಂತ್ರ್ಯ ಹರಿಕಾರರಾದ ಅಂಬೇಡ್ಕರ್, ವಲ್ಲಭಾಯಿ ಪಟೇಲ್ ಸ್ಮರಿಸಿ ಮಾತು ಆರಂಭಿಸಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕೋರೋನದಿಂದ ಭಯ ಪಡುವ ಅಗತ್ಯವಿಲ್ಲ, ತಾವು ಕೊರೊನದಿಂದ ಗುಣಮುಖರಾಗಿದ್ದು ಈ ಸಮಯದಲ್ಲಿ ನೆನಪಿಸಿಕೊಂಡರು.
- ಉದ್ಯಮಗಳಿಗೆ ಉತ್ತೇಜನ ನೀಡಲು ಹಾಗೂ ಭೂಮಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೇ ಹಾಗೂ ಉದ್ಯೋಗವಕಾಶಕ್ಕಾಗಿ ಹಲವಾರು ಯೋಜನೆ ರೂಪಿಸುತ್ತಿದೆ ಎಂದರು.
- ಪ್ರಕೃತಿ ವಿಕೋಪಗಳನ್ನು ಎದುರಿಸಲು ಸಕಲ ರೀತಿಯಲ್ಲೂ ಸಿದ್ಧವಾಗಿದ್ದೇವೆ.
- ಆಯುಷ್ ಮಾನ್ ಭಾರತ ಮಿಷನ್ ಅಡಿಯಲ್ಲಿ ಎಲ್ಲರಿಗೂ ಆರೋಗ್ಯ ಭದ್ರತೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ.
- 3187 ಕೋಟಿ ರೂಪಾಯಿ ಪ್ಯಾಕೇಜ್ ಆರ್ಥಿಕ ಸುಧಾರಣೆಗೆಂದು ಘೋಷಣೆ.
- 30 ಲಕ್ಷ ರೂಪಾಯಿ ಕೊರೊನ ವಾರಿಯರ್ಸ್ ಕುಟುಂಬಕ್ಕೆ ನೀಡಲು ಸರ್ಕಾರ ನಿರ್ಧಾರ.
- SSLC ಹಾಗೂ ಇತರ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
- ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ವಿದ್ಯಾದಾನ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
- ರೈತರಿಗಾಗಿ ಬೆಳೆಸಾಲ ಹಾಗೂ ಬೆಂಬಲ ಬೆಲೆ ಯೋಜನೆ ಜಾರಿ.
- 3.37 ಕೋಟಿ ಕುಟುಂಬಗಳಿಗೆ ಜಾಬ್ ಕಾರ್ಡ್ ನೀಡಲಾಗಿದೆ.
- 30695 ಕೋಟಿ ವೆಚ್ಚದಲ್ಲಿ 2024 ಜೂನ್ ವೇಳೆಗೆ ಮೆಟ್ರೋದ 2 ನೆ ಹಂತ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
- ದೇಶಿಯ ಹಾಗೂ ಸಣ್ಣ ಮಧ್ಯಮ ಹಾಗೂ ಸ್ವಾವಲಭಿ ಭಾರತ ಯೋಜನೆಯಲ್ಲಿ ರಾಜ್ಯ 3 ನೆ ಸ್ಥಾನದಲ್ಲಿದೆ ಹಾಗೂ ಹಲವಾರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
- 5 ಲಕ್ಷ ಹೊಸಮನೆ ನಿರ್ಮಾಣ ಹಾಗೂ 10 ಸಾವಿರ ಹಾನಿಗೆ ಪರಿಹಾರ ನೀಡಲು ಸೂಚಿಸಲಾಗಿದೆ.
ಇದನ್ನೂ ಓದಿರಿ: ಭಾರತದ ಸ್ವಾತಂತ್ರ್ಯ ಇತಿಹಾಸ, ರಾಷ್ಟ್ರ ದ್ವಜದ ತಯಾರಿಕೆಯ ಮತ್ತು ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಯಿರಿ