BIGG BOSS ಮನೆಯಿಂದ ಹೊರ ಬಂದ ಅರುಣ್ ಸಾಗರ್: ಟ್ರೋಫಿ ಗೆಲ್ಲುವ ಕನಸು ಭಗ್ನ

arun-sagar-eliminated-from-bigg-boss-kannada-season-9-just-one-week-before-bbk9-finale

‘ಬಿಗ್​ ಬಾಸ್​(BIGG BOSS)ಕನ್ನಡ ಸೀಸನ್​ 9’ ಶೋನ 13 ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಅರುಣ್​ ಸಾಗರ್ (Arun Sagar)​ ಅವರು ಔಟ್​ ಆಗಿದ್ದಾರೆ. ಮುಂದಿನ ವಾರವೇ ಬಿಗ್​ ಬಾಸ್​ ಫಿನಾಲೆ ನಡೆಯಲಿದೆ. ಆದರೆ ಫಿನಾಲೆ ವಾರಕ್ಕೆ ಕಾಲಿಡುವಲ್ಲಿ ಅರುಣ್​ ಸಾಗರ್​ ಮುಗ್ಗರಿಸಿದ್ದಾರೆ.

ಬಿಗ್​ ಬಾಸ್​ ಕನ್ನಡ ಆವೃತ್ತಿಯ ಮೊದಲ ಸೀಸನ್ ನಲ್ಲಿ ಭಾಗಿಯಾಗಿದ್ದ ಅರುಣ್ ಸಾಗರ್ ಅವರಿಗೆ ಈ ಬಾರಿ ಎರಡನೆಯ ಅವಕಾಶ ದೊರೆತಿತ್ತು. ಆದರೆ ಫೈನಲ್ ವಾರಕ್ಕೆ ಕಾಲಿಡುವ ಮುನ್ನವೇ ಮನೆಯಿಂದ ಔಟ್ ಆಗಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಬಿಗ್​ ಬಾಸ್​ ಮನೆಯಲ್ಲಿ ಅರುಣ್ ಸಾಗರ್ ವಿಶೇಷವಾಗಿ ಮನರಂಜನೆ ನೀಡಲು ಪ್ರಯತ್ನಿಸಿದ್ದರು. 93ನೇ ದಿನದವರೆಗೂ ಅವರು ವೀಕ್ಷಕರಿಂದ ಹೆಚ್ಚಿನ ವೋಟ್​ ಪಡೆದು ಸೇಫ್​ ಆಗಿದ್ದರು. ಆದರೆ ಈ ನಡುವೆ ಅವರಿಗೆ ಕೆಲವೊಂದು ಅಡೆತಡೆ ಉಂಟಾಗಿತ್ತು. ಅವರ ಕೈಗೆ ಪೆಟ್ಟಾಗಿತ್ತು. ಅವರ ಮಗಳು ಅದಿತಿ ಸಾಗರ್​ಗೆ ಪೆಟ್ಟಾಗಿದ್ದರಿಂದ ಅವರು ಮಾನಸಿಕವಾಗಿ ಕೊಂಚ ಕುಗ್ಗಿದರು. ಈ ಎಲ್ಲ ಕಾರಣದಿಂದ ಅರುಣ್​ ಸಾಗರ್​ ಎಲಿಮಿನೇಟ್​ ಆಗಬೇಕಾಯಿತು.

ಇದನ್ನೂ ಓದಿರಿ: ಅಮೂಲ್ಯ ಅವಳಿ ಮಕ್ಕಳ ಹಾರೈಸಿದ ವೃಕ್ಷಮಾತೆ ತಿಮ್ಮಕ್ಕ

LEAVE A REPLY

Please enter your comment!
Please enter your name here