ಚೆನ್ನೈ: ನಾಗಮಂಡಲ, ಸೂರ್ಯವಂಶ, ಜೋಡಿಹಕ್ಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ದೇಹಸ್ಥಿತಿ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇವರು ಆತ್ಮಹತ್ಯೆಗೂ ಮುನ್ನ ಒಂದು ವಿಡಿಯೋಮಾಡಿದ್ದು, ಅದರಲ್ಲಿ ತಮ್ಮ ತಾಯಿ ಮತ್ತು ಸಹೋದರಿಗೊಸ್ಕರ ಇಷ್ಟು ವರ್ಷ ಕಷ್ಟಗಳನ್ನೆಲ್ಲಾ ಸಹಿಸಿಕೊಂಡಿದ್ದೇನೆ. ಆದರೆ ಇನ್ನು ನನ್ನಿಂದ ಸಾಧ್ಯವಿಲ್ಲ. ನಾನು ಕನ್ನಡದ ನಟಿ ಎಂಬ ಕಾರಣಕ್ಕೆ ನಟ ಸೀಮನ್ ಮತ್ತು ಹರಿನಾಡರ್ ನನಗೆ ತುಂಬಾ ಕಷ್ಟವನ್ನು ನೀಡಿದ್ದಾರೆ. ನನ್ನ ಸಾವಿಗೆ ಕಾರಣರಾದ ಇವರನ್ನು ನೀವು ಸುಮ್ಮನೆ ಬಿಡಬಾರದು, ನಾನು ಈಗಾಗಲೇ ಬಿಪಿ ಲೋ ಆಗುವಂತಹ ಮೂರು ಮಾತ್ರೆಯನ್ನು ತೆಗೆದುಕೊಂಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಲಾಗಿತ್ತು. ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಂತೆ ವೈರಲ್ ಆಗಿದೆ. ಈ ವಿಷಯ ತಿಳಿದ ಕುಟುಂಬದವರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
Too sad….
Suicide is never a solution…. cheap people like #seeman should be arrested. #ntk should be ashamed. #vijayalakshmi https://t.co/DO3qDbGoL8— எண்ணம் போல் வாழ்க்கை (@PKalivarathan) July 26, 2020