ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ ಕೊರೋನಾ ಸೋಂಕು 10,453 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಇಲ್ಲಿಯವರೆಗೆ ಒಟ್ಟು ಸಂಖ್ಯೆ ಕ್ಕೆ ಏರಿಕೆಯಾದಂತಾಗಿದೆ. ಇದರೊಂದಿಗೆ ಇಂದು 136 ಜನರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರು ಒಂದರಲ್ಲಿಯೇ ಇಂದು 4,868 ಪ್ರಕರಣಗಳು ಪತ್ತೆಯಾಗಿದ್ದು, 67 ಜನರು ಸಾವನ್ನಪ್ಪಿದ್ದಾರೆ. ಇದಲ್ಲದೇ ಇಂದು 2,373 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಬೆಂಗಳೂರೊಂದರಲ್ಲಿಯೇ 1,78,914 ಜನರು ಗುಣಮುಖರಾಗಿ ಮನೆಗೆ ತೆರಳಿದಂತಾಗಿದೆ.
ಇಂದು ಪತ್ತೆಯಾದ 10,453 ಪ್ರಕರಣಗಳಲ್ಲಿ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ,ಬೆಂಗಳೂರು ನಗರ 4868, ಹಾಸನ 475, ಮೈಸೂರು 414, ದಕ್ಷಿಣ ಕನ್ನಡ 362, ಶಿವಮೊಗ್ಗ 347, ಉಡುಪಿ 319, ಬಳ್ಳಾರಿ 313, ಬೆಂಗಳೂರು ಗ್ರಾಮಾಂತರ 305, ತುಮಕೂರು 297, ದಾವಣಗೆರೆ 288, ಮಂಡ್ಯ 259, ಚಿತ್ರದುರ್ಗ 186, ಚಿಕ್ಕಮಗಳೂರು 177, ಕಲಬುರಗಿ 161, ಧಾರವಾಡ 145, ಕೊಪ್ಪಳ 143, ಚಿಕ್ಕಬಳ್ಳಾಪುರ 141, ವಿಜಯಪುರ 138, ಬಾಗಲಕೋಟೆ 128, ಬೆಳಗಾವಿ 128, ಉತ್ತರಕನ್ನಡ 125, ಚಾಮರಾಜನಗರ 122, ಯಾದಗಿರಿ 117, ಗದಗ 111, ರಾಯಚೂರು 100, ಹಾವೇರಿ 75, ಕೋಲಾರ 72, ಬೀದರ್ 70, ಕೊಡಗು 57, ರಾಮನಗರ 10 ಪ್ರಕರಣಗಳು ದಾಖಲಾಗಿವೆ.
ಇಂದಿನ 29/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/XUz3gDCtyn pic.twitter.com/kZ8awsIrk1
— K’taka Health Dept (@DHFWKA) September 29, 2020